ಹಳ್ಳಿಮೂಲೆಯ ತಳಸಮುದಾಯದ ಹುಡುಗಿಯೊಬ್ಬಳು ಯಾವುದೇ ಸೌಲಭ್ಯ ಮತ್ತು ಶೈಕ್ಷಣಿಕ ಪರಿಸರವು ಇಲ್ಲದ ಹಿನ್ನೆಲೆಯಿಂದ ಬಂದು ಅಕ್ಷರ ಜಗತ್ತಿಗೆ ತನ್ನನ್ನು ತೆರೆದುಕೊಳ್ಳುವ ಮೂಲಕ ನಗರದ ಪ್ರತಿಷ್ಠಿತ ಕಾಲೇಜಿನಲ್ಲಿ ಸೀಟು ಪಡೆದು ಉನ್ನತ ಶಿಕ್ಷಣ ಪಡೆಯುವಾಗಿನ ಅವಳು ಎದುರಿಸುವ ಸವಾಲುಗಳು, ಅನುಭವಿಸಿದ ಅವಮಾನ, ಕೀಳರಿಮೆ, ಅವರ ಬಗೆಗೆ ನಾಗರೀಕ ಜಗತ್ತು ತೋರುವ ಕ್ರೌರ್ಯ, ಅಧ್ಯಾಪಕರು, ಸಹಪಾಠಿಗಳೆನಿಸಿಕೊಂಡವರು ತೋರುವ ನಿರ್ಲಕ್ಷ್ಯ ಇವೆಲ್ಲವನ್ನು ಶಬರಿ ಎಂಬ ಆ ಹುಡುಗಿ ಹೇಗೆ ದಾಟಿಕೊಂಡು ಸಾಧನೆಯ ಹಾದಿ ಹಿಡಿದಳು ಎಂಬುದರ ಆಪ್ತ ಕಥಾನಕವೇ ಈ ಪುಸ್ತಕ. ಸಂಗೀತಾ ಮುಳೆ ಅವರು ಇಂಗ್ಲಿಷ್ ನಲ್ಲಿ ಬರೆದಿರುವ ಕೃತಿಯನ್ನು ಕೆಸ್ತಾರ ವಿ ಮೌರ್ಯ ಹಾಗೂ ವಿಕಾಸ್ ಆರ್ ಮೌರ್ಯ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ.