27-01-1996 ರಂದು ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಸಭಾಭವನದಲ್ಲಿ ಆಕಾಶವಾಣಿ ಧಾರವಾಡ ಕೇಂದ್ರವು ದ.ರಾ. ಬೇಂದ್ರೆಯವರ ಜನ್ಮಶತಮಾನೋತ್ಸವದ ನಿಮಿತ್ತ ನೂರು ಜನ ಆಮಂತ್ರಿತ ಶ್ರೋತೃಗಳ ಸಮ್ಮುಖದಲ್ಲಿ 'ಇದು ಬರಿ ಬೆಳಗಲ್ಲೊ ಅಣ್ಣಾ...' ವಿಚಾರ ಸಂಕಿರಣ ಆಯೋಜಿಸಿತ್ತು. ಆಕಾಶವಾಣಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಬಸವರಾಜ ಸಾದರ ಈ ಕಾರ್ಯಕ್ರಮ ಆಯೋಜಿಸಿ, ಪ್ರಸ್ತುತ ಪಡಿಸಿದ್ದರು. ಕೀರ್ತಿನಾಥ ಕುರ್ತಕೋಟಿ, ಮಲ್ಲೇಪುರಂ ಜಿ.ವೆಂಕಟೇಶ, ಸಿದ್ದಲಿಂಗ ಪಟ್ಟಣಶೆಟ್ಟಿ, ಗುರುಲಿಂಗ ಕಾಪಸೆ, ಚೆನ್ನವೀರ ಕಣವಿ ಬೇಂದ್ರೆ ಸಾಹಿತ್ಯದ ಕುರಿತು ಮಹತ್ವದ ಪ್ರಬಂಧಗಳನ್ನು ಮಂಡಿಸಿದ್ದರು. ಈ ಎಲ್ಲ ಪ್ರಬಂಧಗಳ ಸಂಕಲನವೇ 'ಇದು ಬರಿ ಬೆಳಗಲ್ಲೊ ಅಣ್ಣಾ...ʼ